July 14, 2025
Screenshot_20240117_091310_Google

ಔಷಧ ಮಾರಾಟ: ನಕಲಿ ವೈಧ್ಯರ ಮೇಲೆ ಪ್ರಕರಣ ದಾಖಲು.

ಗಂಗಾವತಿ: ಪರವಾನಗಿ ಇಲ್ಲದೆ ಔಷಧಗಳನ್ನು ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದ ಅಪಾದನೆಯ ಮೇಲೆ ನಾಲ್ಕು ಜನ ನಕಲಿ ವೈಧ್ಯರ ಮೇಲೆ ಗಂಗಾವತಿಯ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಬಿ.ಎಮ್.ಬಾಬು ಹಾಗೂ ಮಹಮ್ಮದ ಜಿಲಾನ್, ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ದೀಪಕ್ ಕುಮಾರ್ ಸೇರಿದಂತೆ ಕೇಸರಹಟ್ಟಿ ಮತ್ತು ಕಾರಟಗಿ ಗ್ರಾಮಗಳಲ್ಲಿಯೂ ಪರವಾನಗಿ ಇಲ್ಲದೆ ಔಷಧ ಸಂಗ್ರಹ ಮತ್ತು ಮಾರಾಟದ ವಿರುದ್ಧ ಇಬ್ಬರು ಆರೋಪಿಗಳ ಮೇಲೆ ಔಷಧ ಮತ್ತು ಕಾಂತಿವರ್ಧಕ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಗಂಗಾವತಿ ನಗರದ ಹಿರಿಯ ಶ್ರೇಣಿ ಮತ್ತು ಹೆಚ್ಚುವರಿ ನ್ಯಾಯಾಲಯದಲ್ಲಿ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ ರಾಠೋಡ ಪ್ರಕರಣ ದಾಖಲಿಸಿದ್ದಾರೆ.

ಆರೋಪ ಸಾಭೀತಾದರೆ ನ್ಯಾಯಾಲಯದಲ್ಲಿ ಎರಡು ವರ್ಷಗಳ ಜೈಲು ಮತ್ತು ಇಪ್ಪತ್ತು ಸಾವಿರದಿಂದ ಒಂದು ಲಕ್ಷಕ್ಕೂ ಮೇಲ್ಪಟ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ನ್ಯಾಯವಾದಿ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply